ಸುಗ್ಗಿಹಬ್ಬ ಮಕರ ಸಂಕ್ರಾಂತಿಗೆ ಟ್ವಿಟ್ಟರ್ ಮೂಲಕ ಶುಭಾಶಯ ಕೋರಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಟ್ವಿಟ್ಟಿಗರು ಸಿಹಿ ಮತ್ತು ಕಹಿ ಎರಡನ್ನೂ ತಿನ್ನಿಸಿದ್ದಾರೆ. <br /> <br />ಭಾನುವಾರ ಜನವರಿ ಹದಿನಾಲ್ಕರಂದು ಸಿಎಂ ಶುಭಾಶಯದ ಟ್ವೀಟ್ ಅನ್ನು @CMofKarnataka ಅಕೌಂಟಿನಿಂದ ಮಾಡಿದ್ದರು. ಅದಕ್ಕೆ ಸುಮಾರು ಆರುನೂರು ಲೈಕ್ಸ್ ಬಂದಿತ್ತು. ಜೊತೆಗೆ, ಅದು 123 ಬಾರಿ ರಿಟ್ವೀಟ್ ಆಗಿತ್ತು, 156 ಜನ ಅದಕ್ಕೆ ರಿಪ್ಲೈ ಮಾಡಿದ್ದರು. <br /> <br />ಮತ್ತೆ ಬನ್ನಿ ಸಾರ್. ಗೆಲುವು ನಿಮ್ಮದಾಗಲಿ. ಮಕರ ಸಂಕ್ರಾಂತಿ ಹಬ್ಬದಂದು ನಾಡಿನ ಜತೆಗೆ ಶುಭ ಕೋರಿದಕ್ಕೆ ಧನ್ಯವಾದಗಳು. ಮುಂದಿನ ಸಂಕ್ರಾತಿಗೆ ನೀವೂ ಅಧಿಕಾರದಲ್ಲಿ ಇಲ್ಲದಿದ್ದಾರೆ ಸಾಕು.. ಹೀಗೆ ಮುಖ್ಯಮಂತ್ರಿಗಳಿಗೆ, ಟ್ವಿಟ್ಟಿಗರು ಸಿಹಿಕಹಿ ಎರಡನ್ನೂ ತಿನ್ನಿಸಿದ್ದಾರೆ. <br /> <br />ಬಿಜೆಪಿ, RSS, ಸಂಘಪರಿವಾರದವರು ಭಯೋತ್ಪಾದಕರು ಎನ್ನುವ ಮುಖ್ಯಮಂತ್ರಿಗಳ ಹೇಳಿಕೆಯ ನಂತರ, ಪರವಿರೋಧ ನಿಲುವು/ಹೇಳಿಕೆಗಳು ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದೆ. <br /> Karnataka Chief Minister Siddaramaiah's Makara Sankranti wishes through Twitter and twitterite reply for the CM tweet.